by 1 on | 2025-08-11 09:38:47
Share: Facebook | Twitter | Whatsapp | Linkedin | Visits: 122
ಈ ಜಗತ್ತು ಚಲನಶೀಲ. ಜಗತ್ ಈ ಶಬ್ದದ ಅರ್ಥವೇ ಚಲನೆ ಎಂದಾಗುತ್ತದೆ. *“ಜಂ ಗಚ್ಛತಿ ಇತಿ ಜಗತ್"* ಎಂದು ಜಗತ್
ಶಬ್ದದ ವಿಶ್ಲೇಷಣ ವ್ಯಾಖ್ಯಾನವಾಗಿದೆ. ನಮ್ಮ ಸುತ್ತಮುತ್ತ ಇರುವ ಜಗತ್ತಿನಲ್ಲಿ ಯಾವುದೂ ಸ್ಥಿರವಾಗಿಲ್ಲ. ಸೂರ್ಯ, ಚಂದ್ರ, ಭೂಮಿ
ಕೋಟ್ಯಂತರ ನಕ್ಷತ್ರಗಳಿಂದ ಕೂಡಿದ ಅದ್ಭುತ ವಿಶ್ವವೆಲ್ಲವೂ ಚಲಿಸುತ್ತದೆ. ಇದು ನಮ್ಮ ಋಷಿಮುನಿಗಳು ಮಾಡಿದ ಅದ್ಭುತ ಸಂಶೋಧನೆ.ಆದರೆ ನಾವು ಈ ಜಗತ್ತು ನಮ್ಮ ಜೀವನ, ಸಿರಿ, ಸಂಪದ ಎಲ್ಲವೂ ಸ್ಥಿರವೆಂದು ಭಾವಿಸಿದ್ದೇವೆ. ಇದು ನಮ್ಮ ಭ್ರಮಾತ್ಮಕ ಕಲ್ಪನೆ ವಿನ ಸತ್ಯವಲ್ಲ. ಆದುದರಿಂದ ಈ ಜಗತ್ತಿನಲ್ಲಿ ಯಾವುದೂ ಸ್ಥಿರವಲ್ಲವೆಂದು
ಅರಿತು, ನೆಮ್ಮದಿಯಿಂದ ಬಾಳುವುದೇ ಆಧ್ಯಾತ್ಮಿಕ ಆದರ್ಶ ಜೀವನ.
ಈ ಜಗತ್ತಿನಲ್ಲಿರುವ ಚಲನೆಯನ್ನು ಮುಖ್ಯವಾಗಿ ಎರಡು ಪ್ರಕಾರದಲ್ಲಿ ವಿಂಗಡಿಸಬಹುದು. ೧) ದೇಶಿಕ ಚಲನೆ ೨) ಕಾಲಿಕ ಚಲನೆ. ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಹೋಗುವುದು
ದೇಶಿಕ ಚಲನೆ. ಒಂದು ಕಾಲದಿಂದ ಇನ್ನೊಂದು ಕಾಲಕ್ಕೆ ಹೋಗುವುದು
ಕಾಲಿಕ ಚಲನೆ. ವಸ್ತುಗಳು ಎಷ್ಟೇ ಸ್ಥೂಲವಿರಲಿ , ಸೂಕ್ಷ್ಮವಿರಲಿ ಎಲ್ಲವೂ
ಚಲಿಸುತ್ತವೆ. ಈ ಜಗತ್ತಿನಲ್ಲಿ ಚಲಿಸದೇ ಇರುವ ಒಂದೇ ಒಂದು ವಸ್ತುವಿಲ್ಲ. ಯಾವುದೇ ವಸ್ತುವಿರಲಿ ಅದು ಇಂದಿನಂತೆ ನಾಳೆ ಇರುವುದಿಲ್ಲ.ಹೀಗೆ ಜಗತ್ತಿನಲ್ಲಿ ಎಲ್ಲವೂ ಚಲಿಸುವಾಗ ಈ ಜಗತ್ತಿನ ಭಾಗವಾಗಿರುವ
ನಾವು ಚಲಿಸದೇ ಹಾಗೇ ಇರಲು ಹೇಗೆ ಬರುತ್ತದೆ.
ಪರಮ ಪೂಜ್ಯ ಶ್ರೀ *ಸಿದ್ಧೇಶ್ವರ ಸ್ವಾಮೀಜಿ* ಅವರ ಪ್ರವಚನ ಮಾಲಿಕೆಯಿಂದ
ಸಚಿವ ಸಂಪುಟ ವಿಶೇಷ ಸಭೆಯ ಐತಿಹಾಸಿಕ ನಿರ್ಣಯ!
ಚಡಚಣ SBI ಬ್ಯಾಂಕಿನಲ್ಲಿ ಪಿಸ್ತೂಲ್ ತೋರಿಸಿ ಸಿಬ್ಬಂದಿಗೆ ಕಟ್ಟಿಹಾಗಿ ದರೋಡೆ.
ಎಸ್ ಕೆ ಬೆಳ್ಳುಬ್ಬಿನೇತೃತ್ವ ದಲ್ಲಿ ಉಪವಾಸ ಸತ್ಯಾಗ್ರಹ
ಶಿಕ್ಷಕರ ದಿನಾಚರಣೆಯ ಶುಭಾಶಯಗಳು
ಅಬಕಾರಿ ಇಲಾಖೆಯಲ್ಲಿ ಬಗೆದಷ್ಟು ಭ್ರಷ್ಟಾಚಾರ
ಶ್ರೀ ಪ್ರಶಾಂತ ಕಾಳೆ ಅವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ಜರುಗಿಸಲಾಯಿತು
ಸಚಿವ ಸಂಪುಟ ವಿಶೇಷ ಸಭೆಯ ಐತಿಹಾಸಿಕ ನಿರ್ಣಯ!
ಚಡಚಣ SBI ಬ್ಯಾಂಕಿನಲ್ಲಿ ಪಿಸ್ತೂಲ್ ತೋರಿಸಿ ಸಿಬ್ಬಂದಿಗೆ ಕಟ್ಟಿಹಾಗಿ ದರೋಡೆ.
ಎಸ್ ಕೆ ಬೆಳ್ಳುಬ್ಬಿನೇತೃತ್ವ ದಲ್ಲಿ ಉಪವಾಸ ಸತ್ಯಾಗ್ರಹ
ಶಿಕ್ಷಕರ ದಿನಾಚರಣೆಯ ಶುಭಾಶಯಗಳು
ಅಬಕಾರಿ ಇಲಾಖೆಯಲ್ಲಿ ಬಗೆದಷ್ಟು ಭ್ರಷ್ಟಾಚಾರ